ತೈಲ ಬೆಲೆ ಇಳಿಕೆ,ಹಣದುಬ್ಬರದಲ್ಲಿ ಇಳಿತ ಐಟಿ ಕಂಪೆನಿಗಳಿಗೆ ಶುಭ ಸೂಚನೆ ಎಂದು ಇನ್ಫೋಸಿಸ್ ಕಂಪೆನಿಯ ಮೋಹನ್ ದಾಸ್ ಪೈ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.ಅಂದ ಹಾಗೆ ಇನ್ಫೋಸಿಸ್ ತನ್ನ ಕಂಪೆನಿಯ ತೊಂಭತ್ತೇಳು ಸಾವಿರ ನೌಕರರಿಗೆ ಎಲ್ ಐ ಸಿಯಿಂದ ಇಪ್ಪತ್ತನಾಲ್ಕು ಸಾವಿರ ಕೋಟಿ ರುಪಾಯಿಗಳ ಗುಂಪು ವಿಮೆ ಮಾಡಿಸಿಕೊಂಡಿದೆ.
-------------------------------------------------------------
---------------------------------------------------------------------
"ಭಗವಂತನ ಧ್ಯಾನ ಮಾಡುವಾಗ ಸಿಗರೇಟು ಸೇದಬಹುದೇ ",ಎಂದು ಭಕ್ತನೊಬ್ಬ ಸ್ವಾಮೀಜಿಯವರಲ್ಲಿ ಪ್ರಶ್ನಿಸಿದನಂತೆ. "ಖಂಡಿತ ಕೂಡದು", ಎನ್ನುವುದು ಸ್ವಾಮೀಜಿಯ ಉತ್ತರವಾಗಿತ್ತು. ಬಳಿಕ ಇನ್ನೊಬ್ಬ ಭಕ್ತ "ಸಿಗರೇಟು ಸೇದುವಾಗ ಭಗವಂತನ ಧ್ಯಾನ ಮಾಡಬಹುದೇ?" ಕೇಳಿದಾಗ ,"ಖಂಡಿತವಾಗಿಯೂ ಮಾಡಬಹುದು", ಎಂದು ಸ್ವಾಮೀಜಿ ಉತ್ತರಿಸಿದರಂತೆ!
-------------------------------------------------------------------
--------------------------------------------------------------------------
![dna](http://www.dnaindia.com/img/1189440.jpg)
No comments:
Post a Comment