ಪಟಾಕಿ ಸುಟ್ಟು ದೀಪಾವಳಿ ಆಚರಿಸುವುದು ನಮ್ಮ ಸಂಪ್ರದಾಯ. ಹಿಂದೆ ಆ ರೀತಿಯ ಆಚರಣೆ ಹೆಚ್ಚೇನೂ ಸಮಸ್ಯೆ ಒಡ್ಡುತ್ತಿರಲಿಲ್ಲ. ಆದರೀಗ ನಗರಗಳಲ್ಲಿ ಜನಸಂದಣಿಯೋ ಜನಸಂದಣಿ.ವಾಹನ,ಕೈಗಾರಿಕೆಗಳು ಉಂಟು ಮಾಡುವ ಮಾಲಿನ್ಯವೇ ನಗರವಾಸಿಗಳಿಗೆ ಸಾಕಷ್ಟು ಸಮಸ್ಯೆ ತರುತ್ತದೆ.ಅದಕ್ಕೆ ಈ ಪಟಾಕಿಗಳ ಒಗ್ಗರಣೆಯನ್ನೂ ಸೇರಿಸುವ ಅಗತ್ಯವಿದೆಯೇ? ಪಟಾಕಿ ಸಿಡಿಸಿದಾಗ ಉಂಟಾಗುವ ಕಸ,ಪಟಾಕಿ ಪ್ಯಾಕಿಂಗ್ಗೆ ಬಳಸಿದ ಪ್ಲಾಸ್ಟಿಕ್,ಇತ್ಯಾದಿಗಳ ಕಸ ಇವೆಲ್ಲವೂ ನಗರವಾಸಿಗಳ ಮೇಲೆ ಇನ್ನೂ ಒತ್ತಡ ತರುತ್ತದೆ.
ನೆರೆ ಪೀಡಿತ ಜನರ ಅಳಲು ಒಂದು ಕಡೆ ಇದೆ. ಪ್ರಕೃತಿ ಈ ರೀತಿ ಮುನಿಯಲು ಪರಿಸರದ ಬಗ್ಗೆ ನಮ್ಮ ನಿಷ್ಕಾಳಜಿಯೇ ಕಾರಣವಾಗಿರಬಹುದು.ಈಗಲಾದರು ಎಚ್ಚೆತ್ತುಕೊಂಡು, ನಾವು ದೀಪಾವಳಿಯನ್ನು ಹೆಚ್ಚಿನ ಸಂಭ್ರಮವಿಲ್ಲದೆ,ಸಾಂಪ್ರದಾಯಿಕ ಆಚರಣೆಗಳೊಂದಿಗೆ ಆಚರಿಸೋಣ. ಪರಿಸರಕ್ಕೆ ಇನ್ನಷ್ಟು ಹಾನಿಯಾಗುವುದನ್ನು ತಡೆಯೋಣ. ಆಗದೇ?
ಹೊಸದೊಂದು ಜಾವಳಿ
7 years ago