ಮಾಜಿ ಪ್ರಧಾನಿ ವಿ ಪಿ ಸಿಂಗ್ ನಿಧನ
ಅತ್ಯಂತ ಪ್ರಾಮಾಣಿಕ ವ್ಯಕ್ತಿಯಂತೆ ತಮ್ಮ ಇಮೇಜ್ ಬೆಳೆಸಿಕೊಂಡ, ವಿ ಪಿ ಸಿಂಗ್ ಉತ್ತರಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾಸುದ್ದಿ ಮಾಡಿದವರು. ರಾಜೀವ್ ಸಂಪುಟದಲ್ಲಿ ಅರ್ಥ ಮಂತ್ರಿಯಾಗಿ ಅಲ್ಲಿಂದಲೂ ರಾಜೀನಾಮೆ ನೀಡಿ ಹೊರಗೆ ಬಂದಿದ್ದರು. ಬೋಫೋರ್ಸ್ ಲಂಚ ಪ್ರಕರಣದಲ್ಲಿ ರಾಜೀವ್ ಗಾಂಧಿಯವರ ಮೇಲಿದ್ದ ಸಂಶಯದ ನೆರಳಿನ ಲಾಭ ಪಡೆದು ಪ್ರಧಾನಿಯಾದ ವಿ ಪಿ ಸಿಂಗ್, ಹಿಂದುಳಿದವರಿಗೆ ಮೀಸಲಾತಿ ನೀಡುವ ಮಂಡಲ್ ವರದಿಯನ್ನು ಜಾರಿಗೆ ತಂದು ತಮ್ಮದೇ ವೋಟ್ ಬ್ಯಾಂಕ್ ಬೆಳೆಸಲು ಪ್ರಯತ್ನಿಸಿದರು. ಬಿ ಜೆ ಪಿಯ ರಾಮ ಮಂದಿರ ಪರ ಚಳುವಳಿಯ ಅಲೆಯಲ್ಲಿ ಪ್ರಧಾನಿ ಸ್ಥಾನ ಕಳೆದು ಕೊಂಡವರು. ವಿ ಪಿ ಸಿಂಗ್ ಅಪಾರಭರವಸೆ ಮೂಡಿಸಿದರೂ,ನಿರಾಸೆ ಮೂಡಿದರು. ಕೊನೆಯ ವರ್ಷಗಳಲ್ಲಿ ರಕ್ತದ ಕ್ಯಾನ್ಸರ್ನಿಂದ ಬಳಲಿದ ವಿ ಪಿ ಸಿಂಗ್ ಚಿತ್ರಕಾರನೂ ಹೌದು.
------------------------------------------------------------
No comments:
Post a Comment